ಯಕ್ಷರಂಗೋತ್ಸವದಲ್ಲಿ ನಾನಾ ಕಾರ್ಯಕ್ರಮ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಡಿಸೆ೦ಬರ್ 24 , 2013
|
ಡಿಸೆ೦ಬರ್ 21, 2013
|
ಯಕ್ಷರಂಗೋತ್ಸವದಲ್ಲಿ ನಾನಾ ಕಾರ್ಯಕ್ರಮ
ಹೊನ್ನಾವರ
ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ದಿವಂಗತ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆ ನಿಮಿತ್ತ ಕಡತೋಕಾ ಕತಿ-ಸ್ಮೃತಿ ಯಕ್ಷರಂಗೋತ್ಸವ ಡಿ. 25 ರಿಂದ 29 ವರೆಗೆ ಹಳದೀಪುರದ ಶ್ರೀಗೋಪೀನಾಥ ಸಭಾಗ್ರಹದಲ್ಲಿ ನಡೆಯಲಿದೆ ಯಕ್ಷಲೋಕದ ಕಾರ್ಯದರ್ಶಿ ಕಡತೋಕಾ ಗೋಪಾಲಕಷ್ಣ ಭಾಗವತ ತಿಳಿಸಿದ್ದಾರೆ.
ಡಿ. 26ರಂದು ಮಕ್ಕಳ ಯಕ್ಷಗಾನದ ಕುರಿತು ಸಂವಾದ ಮತ್ತು ಬಾಲ ಕಲಾವಿದರಿಗೆ ಸನ್ಮಾನ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ. ಮೂರನೇಯ ದಿನ ಹವ್ಯಾಸಿ ಯಕ್ಷಗಾನವನ್ನು ದಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದ್ದು ಹವ್ಯಾಸಿ ಕಲಾವಿದರೊಬ್ಬರಿಗೆ ಸನ್ಮಾನ ಏರ್ಪಡಿಸಲಾಗಿದೆ.
ಡಿ. 28ರಂದು ಮಹಿಳಾ ಯಕ್ಷಗಾನದ ಕುರಿತು ಸಂವಾದ, ಹಿರಿಯ ಮಹಿಳಾ ಕಲಾವಿದರಿಗೆ ಸನ್ಮಾನ ಮತ್ತು ಬೇರೆ ಬೇರೆ ಪ್ರದೇಶದಿಂದ ಬಂದ ಮಹಿಳಾ ವೇಷಧಾರಿಗಳಿಂದ ಯಕ್ಷಗಾನ ಪ್ರದರ್ಶನ, ಡಿ.29ರಂದು ಬೆಳಿಗ್ಗೆ ಕಡತೋಕಾ ಮಂಜುನಾಥ ಭಾಗವತರ ಶೆಲಿಯ ಭಾಗವತಿಕೆ ಸ್ವರೂಪ, ವಿಶ್ಲೇಷಣೆ ಮತ್ತು ದಾಖಲೆ ನಡೆಯಲಿದೆ.
ಅಪರಾಹ್ನ ಕಡತೋಕಾ ಭಾಗವತರ ಧ್ವನಿಮುದ್ರಣಗಳ ಅಪೂರ್ವ ದಾಖಲೆಯನ್ನು ಸಂಸ್ಥೆಯು ಸ್ವೀಕರಿಸುತ್ತಿದ್ದು ದಾಖಲೆಯನ್ನು ಕೊಡುವ ಮಹನೀಯರಿಗೆ ಸನ್ಮಾನ ಸಂಸ್ಮರಣಾ ನುಡಿಯೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಿತರು ಡಿ.25ರಂದು ಯಕ್ಷಗಾನದ ಮಹೋನ್ನತ ಸಂಘಟಕ ದಿ.ವಿ.ಆರ್.ಹೆಗಡೆ ಹೆಗಡೆಮನೆಯವರ ಹೆಸರಿನಲ್ಲಿ ಸಂಘಟಕ ಪ್ರಶಸ್ತಿಯನ್ನು ಯಕ್ಷಲೋಕ ಸಂಸ್ಥೆಯು ಈ ವರ್ಷದಿಂದ ಯಕ್ಷಗಾನದ ಸಮರ್ಥ ಸಂಘಟಕರೊಬ್ಬರನ್ನು ಗುರುತಿಸಿ ಕೊಡಲು ಯೋಜಿಸಿದ್ದು ಪ್ರಥಮ ಬಾರಿಗೆ ಈ ಪ್ರಶಸ್ತಿಯನ್ನು ಬಚ್ಚಗಾರು ಮೇಳವನ್ನು ಸಂಘಟಿಸಿ ಚರಿತ್ರೆ ನಿರ್ಮಿಸಿದ ಸಂಘಟಕ ಶಿವಮೊಗ್ಗಾ ಜಿಲ್ಲೆ ಸಾಗರ ತಾಲೂಕಿನ ಬಚ್ಚಗಾರಿನ ಶುಂಠಿ ಸತ್ಯನಾರಾಯಣ ಭಟ್ರನ್ನು ಆಯ್ಕೆಮಾಡಲಾಗಿದೆ.
ಡಿ.26ರಂದು ಬಾಲಕಲಾವಿದ ಗೋಕರ್ಣದ ಮಾಸ್ಟರ್ ಅಭಿಷೇಕಗೆ ಸನ್ಮಾನ ನಡೆಯಲಿದ್ದು ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮತ್ತು ಅಭಿನಂದನಾ ಭಾಷಣವನ್ನು ಬಾಲಕರೇ ನಿರ್ವಹಿಸುವುದು ವಿಶೇಷವಾಗಿದೆ.
ಡಿ.27ರಂದು ಹಿರಿಯ ಹವ್ಯಾಸೀ ತಾಳಮದ್ದಳೆ ಅರ್ಥಧಾರಿ ಶಿರಸಿಯ ನಾರಾಯಣ ಭಟ್ ಬಳ್ಳಿ ಇವರಿಗೆ ಸನ್ಮಾನ ನಡೆಯಲಿದೆಮಹಿಳಾ ಯಕ್ಷಗಾನದ ದಿನ ತೆಂಕುತಿಟ್ಟಿನ ಪ್ರಸಿದ್ಧ ಮಹಿಳಾ ಭಾಗವತರಾದ ಲೀಲಾವತಿ ಬೆಪಡಿತ್ತಾಯ ಮಂಗಳೂರು,
ಡಿ. 29ರಂದು ವೇ.ಮೂ.ಗಡಿಗೆಹೊಳೆ ಸುಬ್ರಾಯ ಭಟ್ ಇವರನ್ನು ಸನ್ಮಾನಿಸಲಾಗುವುದು. ಸಂವಾದ,ವಿಚಾರ ಸಂಕಿರಣ ಮತ್ತು ಉಪನ್ಯಾಸ ಡಿ.26ರಂದು ಬೆಳಿಗ್ಗೆ ಬಾಲಯಕ್ಷರಂಗೋತ್ಸವದ ಭಾಗವಾಗಿ 'ಮಕ್ಕಳ ಯಕ್ಷಗಾನದ ಸಮಸ್ಯೆಗಳನ್ನು ಮತ್ತು ಸಾಧ್ಯತೆಗಳು ವಿಚಾರದ ಸಂವಾದ ನಡೆಯಲಿದೆ. ರಂಗಕರ್ಮಿ ಡಾ.ಶ್ರೀಪಾದ ಭಟ್, ನಿವತ್ತ ಎಂಜಿನಿಯರ್ ಮತ್ತು ಯಕ್ಷಗಾನ ಬರಹಗಾರ ಜಿ. ಮತ್ಯುಂಜಯ ನಿರ್ವಹಿಸುವರು.
ಡಿ. 27ರಂದು ಬೆಳಗ್ಗೆ ಪ್ರಸಿದ್ಧ ಸಾಹಿತಿ ಎಚ್.ಪಿ.ವಾಸುದೇವ ರಾವ್ ಹಳದೀಪುರ ಅವರು 'ಕನ್ನಡ ಕವಿಗಳು ಕಂಡ ಕಲಿ ಕರ್ಣ' ವಿಷಯವಾಗಿ ಉಪನ್ಯಾಸ ನೀಡುವರು. ಡಿ.28ರಂದು ಬೆಳಗ್ಗೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಪ್ರಾದೇಶಿಕ ಕೇಂದ್ರ-ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಮಹಿಳಾ ಯಕ್ಷರಂಗೋತ್ಸವದ ನಡೆಯಲಿದೆ. ಮಹಿಳಾ ಯಕ್ಷಗಾನದ ಮೇಲೆ ಏರ್ಪಡಿಸಿದ ಈ ಸಂವಾದದಲ್ಲಿ ಯಕ್ಷಗಾನ ಬರಹಾಗರ್ತಿ ಬೆಂಗಳೂರಿನ ಮಮತಾ ಜಿ. ಮತ್ತು ಯಲ್ಲಾಪುರದ ಯಕ್ಷಗಾನ ಸಂಶೋಧಕಿ ಮುಕ್ತಾಶಂಕರ ವಿಚಾರವನ್ನು ಮಂಡಿಸುವರು. ಕವಯತ್ರಿ ಮಾಧವಿ ಭಂಡಾರಿಯವರು ಅಧ್ಯಕ್ಷತೆ ವಹಿಸುವರು.
ಡಿ. 29ರಂದು ಬೆಳಿಗ್ಗೆ ದಿ. ಕಡತೋಕಾ ಮಂಜುನಾಥ ಭಾಗವತರ ಯಕ್ಷಗಾನ ಭಾಗವತಿಕೆಯ ವಿಶ್ಲೇಷಣೆಯೆಂಬ ವಿನೂತನ ಕಾರ್ಯಕ್ರಮವನ್ನು ಪ್ರೊ.ರಾಮ ಹೆಗಡೆ ಕೆರೆಮನೆ ನಡೆಸಿಕೊಡುವರು. ಯಕ್ಷದಿಗ್ಗಜ ಹೊಸ್ತೋಟ ಮಂಜುನಾಥ ಭಾಗವತ ಅಧ್ಯಕ್ಷತೆ ವಹಿಸುವರು. ಈ ಪ್ರಾಯೋಗಿಕ ವಿಶ್ಲೇಷಣೆಯಲ್ಲಿ ಅತಿಥಿಗಳಾಗಿ ಪ್ರಸಿದ್ಧ ಹಿಂದೂಸ್ಥಾನೀ ಸಂಗೀತಗಾರ ಪಂ.ಜಿ.ಆರ್.ಭಟ್ ಬಾಳೆಗದ್ದೆ ಪಾಲ್ಗೊಳ್ಳುವರು.
ಮನರಂಜನೆ: ಡಿ.25ರಂದು ಸಂಜೆ ಪ್ರಸಿದ್ಧ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ಭಾಗವತಿಕೆಯಲ್ಲಿ ಕವಿ ಮುದ್ದಣ ವಿರಚಿತ ರತ್ನಾವತೀ ಕಲ್ಯಾಣ ಪ್ರಸಂಗ ಪ್ರದರ್ಶನ ನೆಡಯಲಿದೆ. ಕೊಂಡದಕುಳಿ ರಾಮಚಂದ್ರ ಹೆಗಡೆ, ವಿದ್ಯಾಧರ ರಾವ್ ಜಲವಳ್ಳಿ, ನೀಲಕೋಡು ಶಂಕರ ಹೆಗಡೆ ಪಾತ್ರಧಾರಿಗಳಾಗಿ ಪಾಲ್ಗೊಳ್ಳುವರು.
ಡಿ.26ರಂದು ಸಂಜೆ ಸನ್ಮಾನಿತ ಬಾಲ ಕಲಾವಿದ ಮಾಸ್ಟರ್ ಅಭಿಷೇಕ ಅಡಿ ಇವರ ಯಕ್ಷನತ್ಯ ಪ್ರದಶನ ನಡೆಯಲಿದೆ. ಪ್ರಸಿದ್ಧ ಭಾಗವತ ಉಮೇಶ ಭಟ್ ಬಾಡ ಇವರ ನಿರ್ದೇಶನದಲ್ಲಿ ಬಾಲ ಕಲಾವಿದರು ಲವಕುಶ ಎಂಬ ಪ್ರಸಂಗವನ್ನು ಪ್ರದರ್ಶಿಸುವರು.
ಡಿ.27ರಂದು ಬೆಳಗ್ಗೆ ಶ್ರೀಪಾದ ಭಟ್ ಕಡತೋಕ ಹಾಗೂ ಸಂಗಡಿಗರು ಗೀತರಾಮಾಯಣ ಪ್ರದರ್ಶಿಸುವರು. ಹವ್ಯಾಸೀ ಯಕ್ಷರಂಗೋತ್ಸವದ ಕೊನೆಯಲ್ಲಿ ಹೊಸಾಕುಳಿಯ ಉಮಾಮಹೇಶ್ವರ ಕಲಾವಧರ್ಕ ಸಂಘದಿಂದ ತಾಳಮದ್ದಳೆ ನಡೆಯಲಿದೆ.
ಡಿ.28ರಂದು ಅಮತಾ ಭಟ್ ಯಕ್ಷನತ್ಯದೊಂದಿಗೆ ಮಹಿಳಾ ಯಕ್ಷಗಾನ ಸಂವಾದ ಪ್ರಾರಂಭವಾಗಲಿದೆ. ಅಪರಾಹ್ನ ಮಹಿಳಾ ಭಾಗವತರಾದ ಲೀಲಾವತಿ ಬೆಪಡಿತ್ತಾಯರು ತಮ್ಮ ಸಂಗಡಿಗರೊಂದಿಗೆ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯನ್ನು ಪ್ರದರ್ಶಿಸಲಿದ್ದಾರೆ. ಕೊನೆಯಲ್ಲಿ ಮಹಿಳೆಯರಿಂದ ಯಕ್ಷಗಾನ ಜಾಂಬವತಿ ಪರಿಣಯ ಪ್ರದರ್ಶಿತವಾಗಲಿದೆ. ಐನಬೆಲು ಪರಮೇಶ್ವರ ಹೆಗಡೆಯವರ ಭಾಗವತಿಕೆಯಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಬೇರೆ ಬೇರೆ ಪ್ರದೇಶದ ಮೂವರು ಪರಿಣತ ಮಹಿಳಾ ವೇಷಧಾರಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.
ಶಿವಮೊಗ್ಗಾದ ಕಿರಣ ಪೆ,ಸಾಗರದ ಸೌಮ್ಯ ಗೋಟಗಾರು ಮತ್ತು ಶಿರಸಿ ಸೌಮ್ಯ ಹೆಗಡೆ ಪಾತ್ರನಿರ್ವಹಿಸುವರು. ಡಿ. 29 ರಂದು ಡಾ.ಎಂ.ಪ್ರಭಾಕರ ಜೋಶಿ, ಕೊಳ್ಯೂರು ರಾಮಚಂದ್ರ ರಾವ್, ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ಕೆ.ಗೋವಿಂದ ಭಟ್, ಎಂ.ಎ.ಹೆಗಡೆ, ಜಿ.ವಿ.ಹೆಗಡೆ ಮೂರೂರು ಮತ್ತಿತರರಿಂದ ಕಷ್ಣ ಸಂಧಾನ ತಾಳಮದ್ದಳೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೃಪೆ :
http://www.vijaykarnataka.com
|
|
|